ಭಾರತವು ನವದೆಹಲಿಯ ಭಾರತ ಮಂಟಪದಲ್ಲಿ ಭಾರತ ಕೃತಕ ಬುದ್ದಿಮತ್ತೆ(ಎ.ಐ.) ಪರಿಣಾಮ ಶೃಂಗಸಭೆ 2026 ಅನ್ನು ಉದ್ಘಾಟಿಸಲು ಸಿದ್ಧತೆ ನಡೆಸುತ್ತಿರುವಾಗ, ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಮೈಟಿ), ಇಂಡಿಯಾಎಐ ಮಿಷನ್ ಅಡಿಯಲ್ಲಿ, ಇಂಟೆಲ್ ಇಂಡಿಯಾ ಸಹಯೋಗದೊಂದಿಗೆ, ಫೆಬ್ರವರಿ 16, 2026 ರಿಂದ (ಬೆಳಗ್ಗೆ 8:00 ಭಾರತೀಯ ಕಾಲಮಾನ) ಪ್ರಾರಂಭವಾಗುವ “24 ಗಂಟೆಗಳಲ್ಲಿ ಕೃತಕ ಬುದ್ದಿಮತ್ತೆ(ಎ.ಐ.) ಜವಾಬ್ದಾರಿ ಅಭಿಯಾನಕ್ಕಾಗಿ ಪೂರಕ ಪ್ರತಿಜ್ಞೆ” ಎಂಬ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಲಿದೆ.
ಈ ಉಪಕ್ರಮವು “24 ಗಂಟೆಗಳಲ್ಲಿ ಕೃತಕ ಬುದ್ದಿಮತ್ತೆ(ಎ.ಐ.) ಜವಾಬ್ದಾರಿ ಅಭಿಯಾನಕ್ಕಾಗಿ ಪೂರಕ ಪ್ರತಿಜ್ಞೆಗಳು” ಎಂಬ ಶೀರ್ಷಿಕೆಗೆ ಅಧಿಕೃತ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (ಟ್ರೇಡ್ ಮಾರ್ಕ್) ಶೀರ್ಷಿಕೆಯನ್ನು ನೀಡಲು ಪ್ರಯತ್ನಿಸುತ್ತದೆ. ಈ ಅಭಿಯಾನವು ದೇಶಾದ್ಯಂತ ನಾಗರಿಕರನ್ನು ಕೃತಕ ಬುದ್ಧಿಮತ್ತೆಯ ನೈತಿಕ, ಅಂತರ್ಗತ ಮತ್ತು ಜವಾಬ್ದಾರಿಯುತ ಬಳಕೆಗೆ ಬದ್ಧರಾಗಲು ಸಜ್ಜುಗೊಳಿಸಲು ಪ್ರಯತ್ನಿಸುತ್ತದೆ, ಇದು ವಿಶ್ವಾಸಾರ್ಹ ಮತ್ತು ಮಾನವ-ಕೇಂದ್ರಿತ ಕೃತಕ ಬುದ್ದಿಮತ್ತೆ(ಎ.ಐ.) ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಭಾರತದ ಬದ್ಧತೆಯನ್ನು ಬಲಪಡಿಸುತ್ತದೆ.
ಡಿಜಿಟಲ್ ಪ್ರತಿಜ್ಞೆ ವೇದಿಕೆಯನ್ನು http://aipledge.indiaai.gov.in/. ಜಾಲತಾಣ ಮೂಲಕ ಪ್ರವೇಶಿಸಬಹುದು. ಸಂವಾದಾತ್ಮಕ ಮತ್ತು ಜಾಗೃತಿ-ಚಾಲಿತ ಅನುಭವವಾಗಿ ವಿನ್ಯಾಸಗೊಳಿಸಲಾದ ಈ ಉಪಕ್ರಮವು ಸನ್ನಿವೇಶ ಆಧಾರಿತ ಪ್ರಶ್ನೆಗಳನ್ನು ಒಳಗೊಂಡಿದೆ, ಇದು ಭಾಗವಹಿಸುವವರು ಔಪಚಾರಿಕ ಪ್ರತಿಜ್ಞೆಯನ್ನು ತೆಗೆದುಕೊಳ್ಳುವ ಮೊದಲು ಜವಾಬ್ದಾರಿಯುತ ಕೃತಕ ಬುದ್ದಿಮತ್ತೆ(ಎ.ಐ.) ಅಭ್ಯಾಸಗಳ ಬಗ್ಗೆ ಚಿಂತಿಸಲು ಪ್ರೋತ್ಸಾಹಿಸುತ್ತದೆ. ಪೂರ್ಣಗೊಂಡ ನಂತರ, ಭಾಗವಹಿಸುವವರು ಇಂಡಿಯಾಎಐ ಮತ್ತು ಇಂಟೆಲ್ ಇಂಡಿಯಾ ಜಂಟಿಯಾಗಿ ನೀಡಿದ ಡಿಜಿಟಲ್ ಗೌರವ ಬ್ಯಾಡ್ಜ್ ಅನ್ನು ಸ್ವೀಕರಿಸುತ್ತಾರೆ, ಜೊತೆಗೆ ಸರ್ಕಾರ-ನೇತೃತ್ವದ ಕೃತಕ ಬುದ್ದಿಮತ್ತೆ(ಎ.ಐ.) ಕಲಿಕೆಯ ಮಾರ್ಗಗಳಿಗೆ ಪ್ರವೇಶವನ್ನು ಪಡೆಯುತ್ತಾರೆ.
ಪ್ರದೇಶಗಳು ಮತ್ತು ಜನಸಂಖ್ಯಾಶಾಸ್ತ್ರದಾದ್ಯಂತ ಪ್ರವೇಶ ಮತ್ತು ಭಾಗವಹಿಸುವಿಕೆಯ ಸುಲಭತೆಯನ್ನು ಖಚಿತಪಡಿಸಿಕೊಳ್ಳಲು ಈ ಅಭಿಯಾನವನ್ನು ರಚಿಸಲಾಗಿದೆ. ಇದಕ್ಕೆ ಮೈಕ್ರೊಫೋನ್ ಅಥವಾ ಕ್ಯಾಮೆರಾ ಪ್ರವೇಶದ ಅಗತ್ಯವಿಲ್ಲ, ಮತ್ತು ಯಾವುದೇ ಅರ್ಹತಾ ಅಂಕಗಳು ಅಥವಾ ಅರ್ಹತಾ ಅಡೆತಡೆಗಳಿಲ್ಲ
ಭಾಗವಹಿಸುವ ಪ್ರಕ್ರಿಯೆ ವಿಧಾನ
ಭಾಗವಹಿಸುವವರು ಈ ಕೆಳಗಿನವುಗಳ ಮೂಲಕ ಭಾಗವಹಿಸಬಹುದು:
- ಅಧಿಕೃತ ಪ್ರತಿಜ್ಞೆ ಪೋರ್ಟಲ್ಗೆ ಭೇಟಿ ನೀಡುವುದು
- ಸರಳ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು
- ಒಟಿಪಿ (ಇಮೇಲ್ ಐಡಿ ಅಥವಾ ಫೋನ್ ಸಂಖ್ಯೆ) ಮೂಲಕ ಭಾಗವಹಿಸುವಿಕೆಯನ್ನು ಪರಿಶೀಲಿಸುವುದು
- ಸಣ್ಣ ಸನ್ನಿವೇಶ ಆಧಾರಿತ ಜಾಗೃತಿ ಪ್ರಶ್ನೆಗಳೊಂದಿಗೆ ತೊಡಗಿಸಿಕೊಳ್ಳುವುದು
- ಔಪಚಾರಿಕ AI ಜವಾಬ್ದಾರಿ ಪ್ರತಿಜ್ಞೆಯನ್ನು ಸಲ್ಲಿಸುವುದು
ಸಾರ್ವಜನಿಕ ವಲಯದ ಪ್ರತಿನಿಧಿಗಳು, ಉದ್ಯಮ ವೃತ್ತಿಪರರು, ಸ್ಟಾರ್ಟ್ಅಪ್ಗಳು ಮತ್ತು ವೈವಿಧ್ಯಮಯ ಹಿನ್ನೆಲೆಯ ನಾಗರಿಕರಿಂದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ. ಯುವಜನರ ತೊಡಗಿಸಿಕೊಳ್ಳುವಿಕೆಗೆ ಬಲವಾದ ಒತ್ತು ನೀಡುವ ಮೂಲಕ, ಅಭಿಯಾನವು ಜವಾಬ್ದಾರಿಯುತ ಕೃತಕ ಬುದ್ದಿಮತ್ತೆ(ಎ.ಐ.) ಬಳಕೆ, ಡೇಟಾ ಗೌಪ್ಯತೆ, ಹೊಣೆಗಾರಿಕೆ ಮತ್ತು ತಪ್ಪು ಮಾಹಿತಿಯನ್ನು ಎದುರಿಸುವ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.
ಕೃತಕ ಬುದ್ದಿಮತ್ತೆ (ಎ.ಐ.) ಜವಾಬ್ದಾರಿಯುತ ಬಳಕೆಯ ಪ್ರತಿಜ್ಞೆ ಅಭಿಯಾನವು ಫೆಬ್ರವರಿ 16-20, 2026 ರಂದು ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿರುವ ಭಾರತ ಕೃತಕ ಬುದ್ದಿಮತ್ತೆ(ಎ.ಐ.) ಇಂಪ್ಯಾಕ್ಟ್ ಶೃಂಗಸಭೆ 2026 ರ ಪ್ರಮುಖ ನಾಗರಿಕ-ಪಾಲ್ಗೋಳ್ಳುವಿಕೆಯು ಆಧಾರಸ್ತಂಭವಾಗಿದೆ. ಈ ಶೃಂಗಸಭೆಯನ್ನು ಗೌರವಾನ್ವಿತ ಪ್ರಧಾನಮತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಮತ್ತು ಜನರು, ಗ್ರಹ ಮತ್ತು ಪ್ರಗತಿಯ ಮಾರ್ಗದರ್ಶಿ ಸ್ತಂಭಗಳ ಅಡಿಯಲ್ಲಿ ರಾಷ್ಟ್ರಗಳ ಮುಖ್ಯಸ್ಥರು, ಜಾಗತಿಕ ನಾಯಕರು, ನೀತಿ ನಿರೂಪಕರು, ಉದ್ಯಮ ತಜ್ಞರು, ಸಂಶೋಧಕರು, ನವೋದ್ಯಮಗಳು, ಶೈಕ್ಷಣಿಕ ಮತ್ತು ನಾಗರಿಕ ಸಮಾಜವನ್ನು ಒಟ್ಟುಗೂಡಿಸಿ ಸಮಗ್ರ ಮತ್ತು ಅಭಿವೃದ್ಧಿ-ಆಧಾರಿತ ಫಲಿತಾಂಶಗಳಿಗಾಗಿ ಕೃತಕ ಬುದ್ದಿಮತ್ತೆ(ಎ.ಐ.) ಅನ್ನು ಬಳಸಿಕೊಳ್ಳುವ ಬಗ್ಗೆ ಚರ್ಚಿಸಲಿದ್ದಾರೆ.
ಬಲವಾದ ಪರಿಸರ ವ್ಯವಸ್ಥೆಯ ಸಹಯೋಗ ಮತ್ತು ರಾಷ್ಟ್ರವ್ಯಾಪಿ ಸಜ್ಜುಗೊಳಿಸುವಿಕೆಯ ಮೂಲಕ, ಜವಾಬ್ದಾರಿಯುತ ಕೃತಕ ಬುದ್ದಿಮತ್ತೆ (ಎ.ಐ.) ಬಳಕೆ ಮಾಡುವ ಮೂಲಕ ತೊಡಗಿಸಿಕೊಳ್ಳುವಿಕೆಯಲ್ಲಿ ಐತಿಹಾಸಿಕ ಮಾನದಂಡವನ್ನು ಸ್ಥಾಪಿಸುವ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಾರ್ವಜನಿಕ ನಂಬಿಕೆಯನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಭಾರತ ಹೊಂದಿದೆ.
Source : PIB

